ಪುಣಚ:- ಪುಣಚ ಗ್ರಾಮದಲ್ಲಿ ಬರುವ ನವಗ್ರಾಮ ಎಂಬಲ್ಲಿನ ಅತ್ಯಂತ 5 ಕಡು -ಬಡ ಕುಟುಂಬಗಳಿಗೆ ಜೋಯ್ ಅಲುಕ್ಕಾಸ್ ಸಂಸ್ಥೆಯವರು ಉಚಿತ ಮನೆ ನಿರ್ಮಾಣ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.ವಿಶೇಷವಾಗಿ ಪುಣಚ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಪ್ರತಿಭಾ ಶ್ರೀಧರ್ ಶೆಟ್ಟಿಯವರು ಈ ವಿಚಾರದ ಬಗ್ಗೆ ವಿಶೇಷ ಮುತುವರ್ಜಿ ವಹಿಸುವ ಮೂಲಕ ಜೋಯ್ ಅಲುಕ್ಕಾಸ್ ಸಂಸ್ಥೆಯವರು ಇವರನ್ನು ಸಂಪರ್ಕಿಸಿದಾಗ ನವ ಗ್ರಾಮದಲ್ಲಿ ಇರುವ ಅತ್ಯಂತ 5 ಕಡು-ಬಡತನದ ಕುಟುಂಬಗಳನ್ನು ಜೋಯ್ ಅಲುಕ್ಕಾಸ್ ಸಂಸ್ಥೆಯವರಿಗೆ ಸೂಚಿಸಿದ್ದರು ಇದರ ಮುಂದುವರಿದ ಭಾಗವಾಗಿ ಪುಣಚ ಗ್ರಾಮದಲ್ಲಿ 5 ಮನೆಗಳು ನಿರ್ಮಾಣ ಆಗುವ ಮೂಲಕ ಇಂದು ಅಧಿಕೃತವಾಗಿ ಜೋಯ್ ಅಲುಕ್ಕಾಸ್ ಸಂಸ್ಥೆಯವರು ಮನೆಯನ್ನು ಬಡವರಿಗೆ ಹಸ್ತಾಂತರಿಸಿದರು ಇದಕ್ಕಾಗಿ ಸಹಕಾರ ನೀಡಿದ ಪುಣಚ ಗ್ರಾಮಸ್ಥರಿಗೆ ಹಾಗೂ ಇದರ ಇಂಜಿನಿಯರ್ ಆಗಿ ಕೆಲಸ ಮಾಡಿದ ರವಿ ಬಿಕೆ ,ಇದಕ್ಕೆ ಸಹಕಾರ ನೀಡಿದ ಸಿರಾಜ್ ಮಣಿಲ ಇವರನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು…ಈ ಸುಂದರ ಸಮಾರಂಭದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಶ್ರೀಧರ್ ಶೆಟ್ಟಿ ದೇವರಗುಂಡಿ, ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಬೇಬಿ ಪಟಿಕಲ್ಲು-, ಉಪಾಧ್ಯಕ್ಷರಾದ ಮಹೇಶ್ ಶೆಟ್ಟಿ, ಸದಸ್ಯರಾದ ಶ್ರೀಮತಿ ಗಿರಿಜಾ, ಸಿರಾಜ್ ಮಣಿಲ,ಪುಣಚ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ರೈ ಬೈಲುಗುತ್ತು, ಜೋಯ್ ಅಲುಕ್ಕಾಸ್ ಸಂಸ್ಥೆಯ ಮಾಲಕರು ಹಾಗೂ ವಿವಿಧ ಸಿಬ್ಬಂದಿಗಳು ಉಪಸ್ಥಿತರಿದ್ದರು..
Subscribe to Updates
Get the latest creative news from FooBar about art, design and business.