ಮತ್ತೆ ಕರಾವಳಿ ಜಿಲ್ಲೆಯಲ್ಲಿ ಸೆಟೆದು ನಿಲ್ಲಲಿದೆಯಾ ಕಾಂಗ್ರೆಸ್* *ರಾಜ್ಯ ರಾಜಕಾರಣದಲ್ಲಿ ಹುಟ್ಟು ಹಾಕಿದ ತೀವ್ರ ಸಂಚಲನೆ*ಮಂಗಳೂರು:- ಕರಾವಳಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಭೀಷ್ಮ ಜಾತ್ಯತೀತ ನಾಯಕ ಮಾಜಿ ಸಚಿವ ಮಾಜಿ ಶಾಸಕ ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಧೀಮಂತ ನಾಯಕ ಬಿ ರಮನಾಥ್ ರೈ ಅವರಿಗೆ ಈ ಭಾರಿ ವಿಧಾನ ಪರಿಷತ್ ಸ್ಥಾನ ನೀಡಬೇಕು ಎನ್ನುವ ಕೂಗು ಇಡೀ ಕರಾವಳಿಯ ಜನಸಮೂಹ ಮತ್ತು ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿದೆ.ಅಂದ ಹಾಗೆ ರಮನಾಥ್ ರೈ ಅವರು ಕರಾವಳಿ ಜಿಲ್ಲೆಯಲ್ಲಿ ಸುದೀರ್ಘ ಅವಧಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಆರು ಭಾರಿ ವಿಜೇತರಾಗಿ 3 ಭಾರಿ ಕ್ಯಾಬಿನೆಟ್ ಸಚಿವರಾಗಿ ಕೆಲಸ ಮಾಡಿದ ಜನಪ್ರಿಯ ರಾಜಕಾರಣಿಯಾಗಿ ಗುರುತಿಸಿದ್ದಾರೆ ರಮನಾಥ್ ರೈ ಅವರು ರಾಜಕೀಯ ವಲಯದಲ್ಲಿ ಪ್ರಾಮಣಿಕ ಮತ್ತು ಪರಿಶುದ್ದವಾದ ರಾಜಕೀಯ ನಡೆಸಿದವರು ತನ್ನ ಶಾಸಕ ಮತ್ತು ಸಚಿವ ಸ್ಥಾನದ ಅವಧಿಯಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೇ ಭ್ರಷ್ಟಾಚಾರ ರಹಿತವಾದ ಸೇವೆ ನೀಡಿದ ರಾಜ್ಯದ ಮಹಾನ್ ರಾಜಕಾರಣಿಯಾಗಿದ್ದಾರೆ.ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರಾಗಿ ರಾಜ್ಯದ ಸಚಿವರಾಗಿದ್ದ ಸಂದರ್ಭದಲ್ಲಿ ಸರಕಾರದ ಮೂಲಕ ಕೋಟಿ ಕೋಟಿ ಅಭಿವೃದ್ಧಿ ತರುವ ಮೂಲಕ ಇಡೀ ದ.ಕ.ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣಿಭೂತರಾಗಿದ್ದಾರೆ.ಪ್ರಸ್ತುತ ರಮನಾಥ್ ರೈ ಅವರು ಮಾಜಿ ಆದರೂ ಹಾಲಿ ಶಾಸಕರಂತೆ ನಿರಂತರವಾಗಿ ಪಕ್ಷದ ಕಾರ್ಯಕ್ರಮ, ಪಕ್ಷದ ಸಂಘಟನೆ ಜನರ ಸೇವೆಯಲ್ಲಿ ನಿರತರಾಗುವ ಮೂಲಕ ಇನ್ನಷ್ಟು ಜನಸಾಮಾನ್ಯರಿಗೆ ಹತ್ತಿರವಾಗಿ ಜನಸಾಮಾನ್ಯರ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಸ್ಪಂದನೆ ನೀಡುವ ಕೆಲಸ ಕಾರ್ಯಗಳು ದಿನನಿತ್ಯ ಕಾಣುತ್ತಿದೆ ರಾಜ್ಯದ ಮಾಸ್ ಲೀಡರ್ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರ ಜೊತೆ ಅತ್ಯಂತ ನಿಕಟ ಸಂಪರ್ಕ ಇರುವ ರಮನಾಥ್ ರೈ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಆಯ್ಕೆಯಾಗುವ ಕೂಗು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ ತೀವ್ರ ಕೂತೂಹಲ ಮೂಡಿಸಿರುವ ವಿಧಾನ ಪರಿಷತ್ ಸ್ಥಾನಕ್ಕೆ ರಮನಾಥ್ ರೈ ಅವರು ಸೇರ್ಪಡೆ ಆದರೂ ಅಚ್ಚರಿಪಡಬೇಕಾಗಿಲ್ಲ ಮೂಲಗಳ ಪ್ರಕಾರ ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಟವಾಗಿ ರೂಪುಗೊಳ್ಳಬೇಕಾದರೇ ರೈ ಅವರು ಅಧಿಕಾರದಲ್ಲಿ ಇರಬೇಕು ಎಂಬ ಕೂಗು ಕಾರ್ಯಕರ್ತರಲ್ಲಿ ಇದೇ ಈಗಾಗಿ ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಕೆಸಿ ವೇಣುಗೋಪಾಲ್ , ಸುರ್ಜೆವಾಲ ಅವರ ನಡೆ ಯಾವ ರೀತಿಯಲ್ಲಿ ಮುಂದುವರಿಯಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ-
Subscribe to Updates
Get the latest creative news from FooBar about art, design and business.
ಮಾಜಿ ಸಚಿವ ಬಿ ರಮನಾಥ್ ರೈ ಗೆ ಒಲಿಯಲಿದೆಯಾ ವಿಧಾನ ಪರಿಷತ್ ಸ್ಥಾನ
