ಹಲವಾರು ಮಂದಿ ಉಪಸ್ಥಿತಿ
ಪುತ್ತೂರು:- ಕೋಡಿಂಬಾಡಿಯ ಬೀಡಿ ಉದ್ಯಮಿ,ಹಿರಿಯರು,ಕೃಷಿಕರು ಮತ್ತು ಶಾಸಕರ ತಂದೆಯವರ ಆತ್ಮೀಯರು ಮಹಮ್ಮದ್(ಮೋನುಚ್ಚ) ಭಾರತ್ ರವರ ಮನೆಗೆ ಶಾಸಕರು ಬೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಕೋಡಿಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಮೋನಪ್ಪ ಗೌಡ ಪಮ್ಮನಮಜಲು,ಕಾರ್ಯದರ್ಶಿ ಯೋಗೀಶ ಸಾಮಾನಿ ಸಂಪಿಗೆದಡಿ- ಮಠಂತಬೆಟ್ಟು,ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯರಾದ ನಿರಂಜನ ರೈ ಮಠಂತಬೆಟ್ಟು,ಹಾಲು ಉದ್ಫಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಜಗನ್ನಾಥ ಶೆಟ್ಡಿ ನಡುಮನೆ,ಬೂತ್ ಅಧ್ಯಕ್ಷರುಗಳಾದ ಪ್ರಭಾಕರ ಸಾಮಾನಿ ಮಠಂತಬೆಟ್ಟು,ಯತೀಶ್ ಶೆಟ್ಟಿ ಬರೆಮೇಲು,ವಿದ್ಯುತ್ ಸಲಹಾ ಸಮಿತಿಯ ಸದಸ್ಯರಾದ ಶ್ರೀಮತಿ ರಶ್ಮಿ ನಿರಂಜನ ರೈ ಮಠಂತಬೆಟ್ಟು,ಹಿರಿಯರಾದ ಹುಸೈನ್ ಕೆ.ಬಿ.ಕೆ,ದಾವೂದ್ ಕೋಡಿಯಾಡಿ ಮತ್ತು ಅದ್ರಾಮ ಕೋಡಿಂಬಾಡಿ,ಪ್ರಮುಖರಾದ ಸಬೀರ್ ಸರ್ಗ,ಆದಂ ಕುಂಞಿ,ಹಂಝಾ ಮುಂತಾದವರು ಜೊತೆಗಿದ್ದರು.



