Author: PrasakthaNews

Kannada news website from coastal Karnataka

ಜಿಮ್ ವೇಳೆ ಮಸಲ್ ಕ್ಯಾಚ್ ನಿಂದ ಬಳಲಿದ ಶಾಸಕ ಅಶೋಕ್ ರೈ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಮಾಜಕ್ಕೆ ಮಾದರಿಯಾದ ಶಾಸಕ ಅಶೋಕ್ ಕುಮಾರ್ ರೈ* ಪುತ್ತೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕ ಅಭಿವೃದ್ಧಿಯ ಹರಿಕಾರ ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಶಾಸಕ ಅಶೋಕ್ ಕುಮಾರ್ ರೈ ಅವರು ಜೀಮ್ ವರ್ಕಿಂಗ್ ಮಾಡುವ ಸಂದರ್ಭದಲ್ಲಿ ಕೈಗೆ ಗಾಯ ಮಾಡಿಕೊಂಡಿದ್ದರು ಇದನ್ನು ಲೆಕ್ಕಿಸದೇ ಕೈಗೆ ಪ್ಲ್ಯಾಸ್ಟರ್ ಹಾಕುವ ಮೂಲಕ ನಿನ್ನೆಯ ದಿವಸ ಕಾವುವಿನಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಇಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ‌ ಸಾಮನ್ಯರಂತೆ ಚಿಕಿತ್ಸೆ ಪಡೆಯುವ ಮೂಲಕ ಸಮಾಜಕ್ಕೆ ಮಾದರಿ ಶಾಸಕರಾಗಿ ಗುರುತಿಸಿದ್ದಾರೆ

Read More

ಹೌದು. ನಮ್ಮ ಶಾಸಕರಾದ ಅಶೋಕ್ ಕುಮಾರ್ ರೈಯವರ ತುರ್ತು ಸ್ಪಂದನೆಯಿಂದಾಗಿ ಕೆಲವೇ ಕ್ಷಣಗಳಲ್ಲಿ ಸಮಸ್ಯೆ ಪರಿಹಾರವಾದಾಗ ಆಶಾ ಕಾರ್ಯಕರ್ತೆ ಯೋರ್ವರು ಶಾಸಕರ ಬಗ್ಗೆ ಆಡಿದ ಮೆಚ್ಚುಗೆಯ ನುಡಿಗಳವು ಕೆಲವು ದಿನಗಳ ಹಿಂದೆ ಆಶಾ ಕಾರ್ಯಕರ್ತೆಯರ ನಿಯೋಗವೊಂದು ನಮ್ಮ ಶಾಸಕರಾದ ಅಶೋಕ್ ಕುಮಾರ್ ರೈಯವರನ್ನು ಭೇಟಿ ಮಾಡಿತ್ತಂತೆ. ಪುತ್ತೂರು ತಾಲೂಕಿನ ಆಶಾ ಮೆಂಟರನ್ನು ಪುತ್ತೂರಲ್ಲೇ ಉಳಿಸಿಕೊಳ್ಳ ಬೇಕೆಂಬುದೇ ಅವರ ಪ್ರಮುಖ ಬೇಡಿಕೆ. ಇದು ಸರಕಾರದಿಂದ ಆಗಬೇಕಾದ ಕೆಲಸ. ಅದಕ್ಕೂ ಪರಿಹಾರಕ್ಕೆ ಪ್ರಯತ್ನ ಪಡುತ್ತೇನೆ ಎಂದು ಶಾಸಕರು ಭರವಸೆ ಕೊಟ್ಟರಂತೆ. ಆಗ ಆಶಾ ಕಾರ್ಯಕರ್ತೆಯರು ತಮಗೆ ಎರಡು ತಿಂಗಳ ಸಂಬಳ ಬಂದಿಲ್ಲ ಅಂತ ಅವಲತ್ತುಕೊಂಡರಂತೆ. ನಮ್ಮ ಶಾಸಕರು ತಕ್ಷಣ ಸಂಬಂಧಿಸೊದವರಿಗೆ ಕಾಲ್ ಮಾಡಿ ಈ ಬಗ್ಗೆ ಹೇಳಿದ್ದು, ಅಂದು ಅಶೋಕಣ್ಣನ ಕಚೇರಿಯಿಂದ ಆಶಾ ಕಾರ್ಯಕರ್ತೆಯರು ಮನೆ ಮುಟ್ಟುವ ಮೊದಲೇ ಅವರ ಅಕೌಂಟ್ ಗೆ ಎರಡು ತಿಂಗಳ ಕ್ರೆಡಿಟ್ ಆಗಿದ್ದಂತೆ ಪಕ್ಷ, ಜಾತಿ, ಧರ್ಮ ಬೇಧ ಮಾಡದೇ ಓರ್ವ ಜನಪ್ರತಿನಿಧಿಯಾಗಿ ಸ್ಪಂದನೆ ಕೊಡುವ ಅಶೋಕಣ್ಣ ನಂತಹ…

Read More

ಪುತ್ತೂರು:- ಪುತ್ತೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಅಭಿವೃದ್ಧಿಯ ಹರಿಕಾರರು ಸನ್ಮಾನ್ಯ ಅಶೋಕ್ ಕುಮಾರ್ ಅವರು ಹಾರೆ ಹಿಡಿದು ಚರಂಡಿ ಸ್ವಚ್ಛ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು ಎರಡು ದಿನದಲ್ಲಿ 98 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿ ಶಾಸಕರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಜೂನ್ 15 ರಂದು ಅವರು ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿಯಲ್ಲಿ ಮಳೆ ನೀರು ಚರಂಡಿಯಲ್ಲಿ ಹರಿಯುವಲ್ಲಿ ಹಾರೆ ಹಿಡಿದು ತಾನೇ ಚರಂಡಿ ಸ್ವಚ್ಛಗೊಳಿಸಿದರು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಇದೀಗ 98 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿ ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

Read More

ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈ ಮುಗಿಲನ್, ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಾಡಲಾಗಿದೆ.ಬೆಂಗಳೂರು ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತ ದರ್ಶನ್ ಎಚ್.ವಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ.ಮುಲ್ಲೈ ಮುಗಿಲನ್ ಅವರನ್ನು ಇನ್ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಹ್ಯಾಂಡ್ ಸ್ಟ್ಯಾಂಪ್ಸ್ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿರುವ ದರ್ಶನ್ ಹೆಚ್ ವಿ ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತರಾಗಿದ್ದರು

Read More

ಲಯನ್ಸ್ ಜಿಲ್ಲೆ317 ಡಿ ಇದರ 2025,26 ನೇ ಸಾಲಿನ ನಿಯೋಜಿತ ರಾಜ್ಯಪಾಲರಾದ ಕುಡ್ಪಿ ಅರವಿಂದ ಶೆಣೈ ಯವರ ಜಿಲ್ಲಾ ಪದಗ್ರಹಣ ಸಮಾರಂಭವು ಆಗಸ್ಟ್ ತಿಂಗಳಲ್ಲಿ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಸಂಪುಟ ಪದಗ್ರಹಣದ ಲಾಂಛನ ಅಭಿಲಾಷನ್ನು ಮಾಜಿ ರಾಜ್ಯ ಪಾಲರಾದ ಸಂಜಿತ್ ಶೆಟ್ಟಿಯವರು ಬಿಡುಗಡೆಗೊಳಿಸಿದರು.ಸಮಾರಂಭದಲ್ಲಿ ಪ್ರಸ್ತುತ ಜಿಲ್ಲಾ ರಾಜ್ಯಪಾಲರಾದ ಭಾರತಿ ಬಿ ಎಮ್,ಪ್ರಥಮ ಉಪರಾಜ್ಯಪಾಲರಾದ ತಾರನಾಥ ಎಚ್ .ಎಮ್,ಪೂರ್ವ ರಾಜ್ಯ ಪಾಲರುಗಳು ಲಯನ್ಸ್ ಗಣ್ಯರಾದ ಚಂದ್ರೇ ಗೌಡ,ಬಾಲಕೃಷ್ಣ ಹೆಗ್ಡೆ,ಜೋತಿ ಶೆಟ್ಟಿ, ನ್ಯಾನ್ಸಿ ಮಸ್ಕರೇಂಜಸ್,ಸುದರ್ಶನ್ ಪಡಿಯಾರ್ ವಿಟ್ಲ,ಚಂದ್ರಹಾಸ್ ರೈ, ಶ್ರೀಧರ್ ರಾಜ್ ಶೆಟ್ಟಿ, ಹರೀಶ್ ಆಳ್ವ,ವಿಜಯವಿಷ್ಣು ಮಯ್ಯ,ಜಯಪ್ರಕಾಶ್, ಓಸ್ವಾಲ್ಡ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

Read More

ಮತ್ತೆ ಕರಾವಳಿ ಜಿಲ್ಲೆಯಲ್ಲಿ ಸೆಟೆದು ನಿಲ್ಲಲಿದೆಯಾ ಕಾಂಗ್ರೆಸ್* *ರಾಜ್ಯ ರಾಜಕಾರಣದಲ್ಲಿ ಹುಟ್ಟು ಹಾಕಿದ ತೀವ್ರ ಸಂಚಲನೆ*ಮಂಗಳೂರು:- ಕರಾವಳಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಭೀಷ್ಮ ಜಾತ್ಯತೀತ ನಾಯಕ ಮಾಜಿ ಸಚಿವ ಮಾಜಿ ಶಾಸಕ ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಧೀಮಂತ ನಾಯಕ ಬಿ ರಮನಾಥ್ ರೈ ಅವರಿಗೆ ಈ ಭಾರಿ ವಿಧಾನ ಪರಿಷತ್ ಸ್ಥಾನ ನೀಡಬೇಕು ಎನ್ನುವ ಕೂಗು ಇಡೀ ಕರಾವಳಿಯ ಜನಸಮೂಹ ಮತ್ತು ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿದೆ.ಅಂದ ಹಾಗೆ ರಮನಾಥ್ ರೈ ಅವರು ಕರಾವಳಿ ಜಿಲ್ಲೆಯಲ್ಲಿ ಸುದೀರ್ಘ ಅವಧಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಆರು ಭಾರಿ ವಿಜೇತರಾಗಿ 3 ಭಾರಿ ಕ್ಯಾಬಿನೆಟ್ ಸಚಿವರಾಗಿ ಕೆಲಸ ಮಾಡಿದ ಜನಪ್ರಿಯ ರಾಜಕಾರಣಿಯಾಗಿ ಗುರುತಿಸಿದ್ದಾರೆ ರಮನಾಥ್ ರೈ ಅವರು ರಾಜಕೀಯ ವಲಯದಲ್ಲಿ ಪ್ರಾಮಣಿಕ ಮತ್ತು ಪರಿಶುದ್ದವಾದ ರಾಜಕೀಯ ನಡೆಸಿದವರು ತನ್ನ ಶಾಸಕ ಮತ್ತು ಸಚಿವ ಸ್ಥಾನದ ಅವಧಿಯಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೇ ಭ್ರಷ್ಟಾಚಾರ ರಹಿತವಾದ ಸೇವೆ ನೀಡಿದ ರಾಜ್ಯದ ಮಹಾನ್…

Read More

ಪುತ್ತೂರು:- ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿಟ್ಲ ಮೂಡ್ನೂರು ಗ್ರಾಮದ ಕುಂಡಡ್ಕ, ಶೆಡ್ಡು ಭಾಗದ ರಿಕ್ಷಾ ಚಾಲಕರು ನೂತನವಾದ ರಿಕ್ಷಾ ತಂಗುದಾನ ಮಾಡುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಿದರುಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಎಲ್ಯಣ್ಣ ಪೂಜಾರಿ, ಬೂತ್ ಅಧ್ಯಕ್ಷರಾದ ನಾರಾಯಣ ಪೂಜಾರಿ ಬದಿಗುಡ್ಡೆ ಉಪಸ್ಥಿತರಿದ್ದರು

Read More

ಮಾದಕಟ್ಟೆ ಶಾಲೆಯ ಶೌಚಾಲಯಕ್ಕೆ ಹೋಗುವ ದಾರಿಗೆ ಬೇಲಿ ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಗ್ರಾಮಸ್ಥರು- ನ್ಯಾಯ ಸಿಗದೇ ಹೋದಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ಧತೆವಿಟ್ಲ:- ಹಲವಾರು ವರ್ಷಗಳ ಹಳೆಯ ಇತಿಹಾಸವನ್ನು ಹೊಂದಿದ ಶಾಲೆಗಳಲ್ಲಿ ಒಂದಾಗಿರುವ ಕೊಲ್ನಾಡು ಗ್ರಾಮದ ಮಾದಕಟ್ಟೆ ಶಾಲೆಯ ಶೌಚಾಲಯಕ್ಕೆ ಹೋಗುವ ದಾರಿಗೆ ಶಾಲಾ ಜಾಗದ ಮಾಲೀಕರು ಬೇಲಿ ಹಾಕುವ ಮುಖಾಂತರ ವಿದ್ಯಾರ್ಥಿಗಳ ಭವಿಷ್ಯದ ಜೀವನದಲ್ಲಿ ಚೆಲ್ಲಾಟವಾಡುವ ಕೆಲಸ ಕಾರ್ಯವನ್ನು ಮಾಡಿರುವುದು ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆಹಲವಾರು ವರ್ಷಗಳಿಂದ ಮಾದಕಟ್ಟೆ ಶಾಲೆಯು ಅನೇಕ ವಿದ್ಯಾರ್ಥಿಗಳ ಪಾಲಿಗೆ ಬೆಳಕಾಗಿದ್ದು ಮತ್ತು ಈಗಾಗಲೇ ಅತೀ ಹೆಚ್ಚು ಬಡ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು ಇದನ್ನು ಸಹಿಸದೇ ಕೆಲವು ಪಿತೂರಿ ಷಡ್ಯಂತ್ರದ ಮೂಲಕ ಶೌಚಾಲಯಕ್ಕೆ ಹೋಗುವ ದಾರಿಗೆ ಅಡ್ಡಿಪಡಿಸುವ ಮೂಲಕ ಶಾಲೆಯನ್ನು ಮುಚ್ಚಿಸುವ ವ್ಯವಸ್ಥೆ ಹುನ್ನಾರ ನಡೆಯುತ್ತಿದೆ ಇದಕ್ಕೆ ಸರಿಯಾದ ನ್ಯಾಯ ಸಿಗದೇ ಹೋದಲ್ಲಿ ಗ್ರಾಮಸ್ಥರು ಎಲ್ಲರೂ ಬ್ರಹತ್ ಪ್ರತಿಭಟನೆಗೆ ಸಿದ್ದತೆ ನಡೆಸಿದ್ದಾರೆ

Read More

ಕರ್ನಾಟಕ ರಾಜ್ಯದ ನೂತನ ಪೋಲಿಸ್ ಮಹಾನಿರ್ದೇಶಕರಾದ ಡಾ.ಎಂ.ಎ ಸಲೀಂ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಬೆಂಗಳೂರು:- ಇತ್ತೀಚೆಗೆ ಕರ್ನಾಟಕ ರಾಜ್ಯದ ನೂತನ ಪೋಲಿಸ್ ಮಹಾನಿರ್ದೇಶಕರಾಗಿ ಆಯ್ಕೆಗೊಂಡ ಡಾ.ಎಂ.ಎ ಸಲೀಂ ಅವರನ್ನು ಇಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು

Read More

ವಿಟ್ಲ:- ಕನ್ಯಾನ ಗ್ರಾಮದ ಮಂಡ್ಯೂರು ಎಂಬಲ್ಲಿ ಜನರಿಗೆ ಒಂದು ಕ್ಷಣಕ್ಕೆ ಭೂಮಿ‌ ಕಂಪಿಸಿದ ಆನುಭವ ಉಂಟಾಗಿದ್ದು ಇದರಿಂದ ಸಾರ್ವಜನಿಕರು ಬೆಚ್ಚಿಬೀಳುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.ಈ ಕಂಪಿಸಿದ ಆನುಭವ ಕೇವಲ ಒಂದೆರಡು ಸೆಕೆಂಡ್ ಮಾತ್ರ ಉಂಟಾಗಿದೆ ಈ ಘಟನೆ ಬಗ್ಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಯಬಿಟ್ಟಿದ್ದರು ಗ್ರಾಮಕರಣಿಕರಾದ ಅನಿಲ್ ಮತ್ತು ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ ಮೂಲಗಳ ಪ್ರಕಾರ ಯಾವುದೇ ಹಾನಿ ನಷ್ಟ ಉಂಟಾಗಿಲ್ಲ

Read More