ಲಯನ್ಸ್ ಜಿಲ್ಲೆ317 ಡಿ ಇದರ 2025,26 ನೇ ಸಾಲಿನ ನಿಯೋಜಿತ ರಾಜ್ಯಪಾಲರಾದ ಕುಡ್ಪಿ ಅರವಿಂದ ಶೆಣೈ ಯವರ ಜಿಲ್ಲಾ ಪದಗ್ರಹಣ ಸಮಾರಂಭವು ಆಗಸ್ಟ್ ತಿಂಗಳಲ್ಲಿ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಸಂಪುಟ ಪದಗ್ರಹಣದ ಲಾಂಛನ ಅಭಿಲಾಷನ್ನು ಮಾಜಿ ರಾಜ್ಯ ಪಾಲರಾದ ಸಂಜಿತ್ ಶೆಟ್ಟಿಯವರು ಬಿಡುಗಡೆಗೊಳಿಸಿದರು.ಸಮಾರಂಭದಲ್ಲಿ ಪ್ರಸ್ತುತ ಜಿಲ್ಲಾ ರಾಜ್ಯಪಾಲರಾದ ಭಾರತಿ ಬಿ ಎಮ್,ಪ್ರಥಮ ಉಪರಾಜ್ಯಪಾಲರಾದ ತಾರನಾಥ ಎಚ್ .ಎಮ್,ಪೂರ್ವ ರಾಜ್ಯ ಪಾಲರುಗಳು ಲಯನ್ಸ್ ಗಣ್ಯರಾದ ಚಂದ್ರೇ ಗೌಡ,ಬಾಲಕೃಷ್ಣ ಹೆಗ್ಡೆ,ಜೋತಿ ಶೆಟ್ಟಿ, ನ್ಯಾನ್ಸಿ ಮಸ್ಕರೇಂಜಸ್,ಸುದರ್ಶನ್ ಪಡಿಯಾರ್ ವಿಟ್ಲ,ಚಂದ್ರಹಾಸ್ ರೈ, ಶ್ರೀಧರ್ ರಾಜ್ ಶೆಟ್ಟಿ, ಹರೀಶ್ ಆಳ್ವ,ವಿಜಯವಿಷ್ಣು ಮಯ್ಯ,ಜಯಪ್ರಕಾಶ್, ಓಸ್ವಾಲ್ಡ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

