ಮುಲ್ಕಿ ಆಸ್ತಿಗಾಗಿ ತಾಯಿಯ ಮೇಲೆ ಹಲ್ಲೆ ಮಹಿಳೆಗೆ ನ್ಯಾಯ ಕೊಡಿಸಿದ ಮಹಿಳಾ ಮತ್ತು ಮಕ್ಕಳ ಅಧ್ಯಕ್ಷರಾದ ಶ್ರೀಮತಿ ರಜನಿರಾಜ್
ಮುಲ್ಕಿ ಜೂನ್ – 11 ಬುಧವಾರ ದಿವಸ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ 86 ವರ್ಷದ ಹಿರಿಯ ವೃದ್ಧ ಮಹಿಳೆಗೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆಕೆಯ ಇಬ್ಬರು ಹೆಣ್ಣು ಮಕ್ಕಳು ಹೊಡೆದು ಹಲ್ಲೆ ಮಾಡಿ
ದೌರ್ಜನ್ಯವೆಸಗಿದ್ದು ತೀವ್ರತರದ ಗಾಯದಿಂದಾಗಿ ಹಿರಿಯ ಮಹಿಳೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಹೊಡೆದು ಹಲ್ಲೆ ಮಾಡಿದ್ದ ಈ ಇಬ್ಬರು ಹೆಣ್ಣು ಮಕ್ಕಳ ದೌರ್ಜನ್ಯದ ವಿರುದ್ಧ ಮಂಡ್ಯ ಜಿಲ್ಲೆಯ ಮದ್ದೂರಿನ ಮಹಿಳಾ ಮತ್ತು ಮಕ್ಕಳ ಅಧ್ಯಕ್ಷರಾದ ಶ್ರೀಮತಿ ರಜನಿರಾಜ್ ಅವರಿಗೆ 15 ದಿನಗಳ ಹಿಂದೆ ದೂರನ್ನು ದಾಖಲಿಸಿದ್ದು ನೊಂದ ಹಿರಿಯ ನಾಗರಿಕ ಮಹಿಳೆಯ ಪರವಾಗಿ ಮಂಗಳೂರು ಸಿಟಿ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ದೂರಿನ ಬಗ್ಗೆ ಮನವರಿಕೆ ಮಾಡಿ ಆ ಕ್ಷಣವೇ ಕಚೇರಿಯಿಂದ ಹೊರ ಬಂದು ವೃದ್ಧೆ ಮಹಿಳೆ ಕುಳಿತಿರುವ ಜಾಗಕ್ಕೆ ಬಂದು ಹಿರಿಯ ಮಹಿಳೆಯ ದೌರ್ಜನ್ಯದ ವಿಚಾರವನ್ನು ಆಲಿಸಿದ ಪೊಲೀಸ್ ಆಯುಕ್ತರು ತಕ್ಷಣವೇ ಸಂಬಂಧಪಟ್ಟ ಪೆಣಂಬೂರ್ ಸಹಾಯಕ ಪೊಲೀಸ್ ಕಮಿಷನ್ ರವರಿಗೆ ಈ ದೌರ್ಜನ್ಯ ಪ್ರಕರಣದ ತನಿಖೆ ಮಾಡಲು ಆದೇಶ ಮಾಡಿ ಕಾನೂನಾತ್ಮಕ ನ್ಯಾಯವನ್ನು ಹೊಡಿಸಲು ಶ್ರಮವಹಿಸಿದ್ದಾರೆ
ಇದಕ್ಕಾಗಿ ದೂರದ ಊರು ಮಂಡ್ಯ ಜಿಲ್ಲೆಯ ಮದ್ದೂರಿನಿಂದ ಕರಾವಳಿ ಜಿಲ್ಲೆಯ ಮುಲ್ಕಿಗೆ ಆಗಮಿಸಿ ವೃದ್ಧೆಗೆ ನ್ಯಾಯ ಕೊಡಿಸಿದ ಶ್ರೀಮತಿ ರಜನಿರಾಜ್ ಅವರ ಬಗ್ಗೆ ಕರಾವಳಿ ಜಿಲ್ಲೆಯ ನಾಗರೀಕರು ಸಂತಷ ವ್ಯಕ್ತಪಡಿಸಿದ್ದಾರೆ