ಬೆಳ್ತಂಗಡಿ:- ಬೆಳ್ತಂಗಡಿ ತಾಲೂಕಿನ ಕಾಜೂರು ಸಮೀಪದ ನಿವಾಸಿ ಸುಮಾರು 85 ವರ್ಷ ಪ್ರಾಯದ ಅಲಿಮಮ್ಮ ಎಂಬವರು ಸಂಬಂಧಿಕರ ಮನೆ ಬೋಳಿಯಾರಿಗೆಂದು, ಎಂದು ಒಬ್ಬರೇ ಕಾಜು ಉರಿನಿಂದ ಹೊರಟವರು ಬೆಳ್ತಂಗಡಿಯಿಂದ ದಿಕ್ಕು ತಪ್ಪಿ ಪುತ್ತೂರಿಗೆ ಹೋಗುವ ಸರಕಾರಿ ಎಕ್ಸ್ಪ್ರೆಸ್ ರಸ್ತೆಗೆ ಹತ್ತಿದರು.
ವಯೋವೃದ್ದೆಯ ಮಾತು ಕಂಡಕ್ಟರಿಗೆ ಅರ್ಥವಾಗದೆ ಮಹಿಳೆಯನ್ನು ಗೇರುಕಟ್ಟೆಯಲ್ಲಿ ತಿಳಿಸಿದರು ಈ ವೃದ್ಧೆಗೆ ದಿಕ್ಕು ತೋಚದೆ ಬಸ್ಸಿನಲ್ಲಿ ಹುಟ್ಟೂರು ಕಡೆ ಪ್ರಯಾಣಿಸುತ್ತಿದ್ದ ಈ ಹಿಂದೆ ಬೆಳ್ತಂಗಡಿ ಠಾಣೆಯಲ್ಲಿ ಪೊಲೀಸಾಗಿದ್ದ ಮಂಗಳೂರಿನ ಸೈಬರ್ ಕ್ರೈಂ ಹೆಡ್ ಕಾನ್ಸ್ಟೇಬಲ್ ಆಗಿರುವ ಸತೀಶ್ ಹಾಗೂ ಬೆಲಾಳಿನ ಆದಂ ಎಂಬವರು ಗೇರುಕಟ್ಟೆಯ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್ ಅವರಿಗೆ ಮಾಹಿತಿ ತಿಳಿಸಿದರು
ತಕ್ಷಣ ಪೇಟೆಗೆ ಬಂದು ಹುಡುಕಾಡಿದಾಗ ಬಸ್ ನಿಲ್ದಾಣದಲ್ಲಿ ಒಂಟಿಯಾಗಿ ದಿಕ್ಕು ತಪ್ಪಿ ಮಹಿಳೆಯರು ಭಯಗೊಂಡಿದ್ದರು ಇವರನ್ನು ವಿಚಾರಿಸಿದಾಗ ಕಾಜೂರು ಕಡೆಯವರೆಂದು ತಿಳಿದು ಬಂತು ತಕ್ಷಣ ಕಾಜೂರು ದರ್ಗಾ ಶರೀಫ್ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಮೂಲಕ ಕುಟುಂಬಸ್ಥರನ್ನು ಸಂಪರ್ಕಿಸಿದರು ಅಬ್ದುಲ್ ಕರೀಮ್ ಅವರು ಸ್ಥಳೀಯ ಆಟೋ ಚಾಲಕ ಶೆಖುಂಙಿ ಎಸ್ ಮತ್ತು ಗೂಡಂಗಡಿ ಹಸೈನಾರ್ ಹಾಜಿ ಇವರ ಸಹಕಾರದಲ್ಲಿ ಕಾಜೂರಿನ ಮಗಳ ಮನೆಗೆ ಅಲಿಮಮ್ಮ ಅವರನ್ನು ಸುರಕ್ಷಿತವಾಗಿ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ
Subscribe to Updates
Get the latest creative news from FooBar about art, design and business.
ದಾರಿ ತಪ್ಪಿ ಬಂದ ವಯೋವೃದ್ದೆಯನ್ನು ರಕ್ಷಿಸಿ ಮನೆಗೆ ತಲುಪಿಸಿ ಮಾನವೀಯತೆ ಮೆರೆದ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಕರೀಮ್ ಗೇರುಕಟ್ಟೆ
