ಧರ್ಮಸ್ಥಳ:-
ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೆನ್ಲಾಕ್ ಮತ್ತು ಲೇಡಿಗೋಷನ್ ಆಸ್ಪತ್ರೆಗೆ 175 ವರ್ಷ ತುಂಬಿದ ಪ್ರಯುಕ್ತ ಸಂಭ್ರಮಾಚರಣೆಯು ಬರುವ ಸೆಪ್ಟೆಂಬರ್ 14 ರಂದು ವೆನ್ಲಾಕ್, ಲೇಡಿಗೋಷನ್, ಕೆ. ಎಮ್.ಸಿ. ಆಸ್ಪತ್ರೆಗಳ ಸಹಬಾಗಿತ್ವದಲ್ಲಿ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿ ಸಿದ್ದಾರಾಮಯ್ಯ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಭಾದ್ಯಕ್ಷರಾದ ಯು.ಟಿ ಖಾದರ್,ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಸೇರಿದಂತೆ ಹಲವಾರು ಸಚಿವರು, ಸಂಸದರು,ರಾಜ್ಯಸಭಾ ಸದಸ್ಯರು,ಜಿಲ್ಲೆಯ ಎಲ್ಲಾ ಶಾಸಕರು,ವಿದಾನ ಪರಿಷತ್ ಸದಸ್ಯರು, ವಿವಿಧ ನಿಗಮ ಮಂಡಳಿಯ ಅಧ್ಯಕ್ಷರುಗಳು,ಜಿಲ್ಲೆಯ ಎಲ್ಲಾ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದ ಮುಂದಿನ ಭಾಗವಾಗಿ ದಿನಾಂಕ:26:06:2025 ರಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕರಾದ ಡಾ.ಶಿವಪ್ರಕಾಶ್ ಡಿ.ಎಸ್. ನೇತೃತ್ವದಲ್ಲಿ ಬೇಟಿ ಮಾಡಲಾಯಿತು.
ಜೊತೆಯಲ್ಲಿ ಪಲಿಯೇಟಿವ್ ಮೆಡಿಕಲ್ ಆಫೀಸರ್ ಡಾ. ಅನ್ನಯ್ಯ ಕುಲಾಲ್,ಪಿಸಿಷಿಯನ್ ಡಾ.ವಿಜಯ ಕುಮಾರ್,ರಕ್ಷಾ ಸಮಿತಿಯ ಪದ್ಮನಾಭ ಅಮೀನ್,ಅಬ್ದುಲ್ ಕರೀಮ್ ಗೇರುಕಟ್ಟೆ, ಶಶಿದರ್ ಬಜಾಲ್, ಅಬ್ದುಲ್ ಸಲೀಮ್, ಶ್ರೀಮತಿ ಪ್ರಮೀಳಾ, ದಾಮೋದರ್ ಪುತ್ತೂರು, ಜಯರಾಮ ಬೆಳ್ತಂಗಡಿ, ವಕ್ಫ್ ಸಲಹಾ ಸಮಿತಿ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಸಹಾಯಕ ಆಡಳಿತಾಧಿಕಾರಿಗಳಾದ ಶ್ರೀಮತಿ ವಿದ್ಯಾ ಬಿ,ಕಛೇರಿ ಅಧೀಕ್ಷಕರಾದ ಅಶೋಕ್ ರಾಜನಾಲ್,ದ್ವಿತೀಯ ದರ್ಜೆ ಸಹಾಯಕ ಎ.ಕ್ಲೆರೆನ್ಸ್ ರಾಜ್,ಸಿಬ್ಬಂದಿ ಸಿದ್ದಪ್ಪ ಹಾಗೂ ಉಸ್ಮಾನ್ ಕೆ.ಪಿ.ಕಾಜೂರು ಹಾಜರಿದ್ದರು.