ಮಂಗಳೂರು :- ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಆಡಳಿತದಿಂದ ಅತಿ ಹೆಚ್ಚು ಲಾಭ ಪಡೆದವರು ದ.ಕ.ಜಿಲ್ಲೆಯವರು ಜಿಲ್ಲೆಯ ಜನರಿಗೆ ಇಂದಿರಾಗಾಂಧಿ ಅವರ ಋಣವಿದೆ ಎಂದು ಮಾಜಿ ಸಚಿವ
ಬಿ ರಮನಾಥ್ ರೈ ಹೇಳಿದರು
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿಯವರು ರಾಜಕೀಯ ಕಾರಣಕ್ಕೆ ತುರ್ತು ಪರಿಸ್ಥಿತಿ ವಿಚಾರವನ್ನು ಮುಂದಿಟ್ಟುಕೊಂಡು ಅವರನ್ನು ಅವಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ
ತುರ್ತು ಪರಿಸ್ಥಿತಿಯಿಂದ ಬಿಜೆಪಿಯವರಿಗೆ ಸಮಸ್ಯೆಯಾಗಿರಬಹುದು ಆದರೆ ಸಮಾಜದ ದುರ್ಬಲ ವರ್ಗದವರಿಗೆ ಯಾವುದೇ ಸಮಸ್ಯೆಯಾಗಿಲ್ಲ ಯಾವೊಬ್ಬ ಬಡವನೂ ಜೈಲಿಗೆ ಹೋದ ಉದಾಹರಣೆ ಇಲ್ಲ ಎಂದರು
ಇಂದಿರಾ ಗಾಂಧಿಯವರು ಜಾರಿಗೆ ತಂದಿರುವ ಭೂ ಮಸೂದೆ ಕಾನೂನು ಬ್ಯಾಂಕ್ ಗಳ ರಾಷ್ಟೀಕರಣ, ಜೀತ ಪದ್ದತಿ ನಿರ್ಮೂಲನೆ ಋಣಭಾರ ಮುಕ್ತಿ 20 ಅಂಶಗಳ ಕಾರ್ಯಕ್ರಮ ಮೊದಲಾದವುಗಳಿಂದ ಜನರಿಗೆ ಲಾಭವಾಗಿದೆ ವಿವಿಧ ಕಾರ್ಯಕ್ರಮಗಳ ಫಲಾನುಭವಿಗಳಲ್ಲಿ ಹೆಚ್ಚಿನ ಸಂಖ್ಯೆಯವರು ದ.ಕ.ಜಿಲ್ಲೆಯವರು
ತುರ್ತು ಪರಿಸ್ಥಿತಿಯನ್ನು ಮಾತನಾಡುವವರಿಗೆ ಇದನ್ನು ನೆನಪಿಸಬೇಕಾಗಿದೆ
ಬಿಜೆಪಿಯವರಿಗೆ ಮತೀಯ ಭಾವನೆ ಕೆರಳಿಸುವ ಉದ್ದೇಶವೇ ಹೊರತು ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ ಎಂದರು