ವಿಟ್ಲ: ವಿಟ್ಲ ಬ್ಲಾಕ್ ಕಾಂಗ್ರೆಸ್ ಮತ್ತು ಪುಣಚ,ಬಲ್ನಾಡು, ಕೊಡಿಪ್ಪಾಡಿ,ಕಬಕ ವಲಯ ಕಾಂಗ್ರೆಸ್ ನ ಆಶ್ರಯದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ಬೃಹತ್ ಕಾಂಗ್ರೆಸ್ ಜನ ಜಾಗೃತಿ ಸಭೆಯು ಜೂ.29 ಆದಿತ್ಯವಾರದಂದು ಈ ಕೆಳಗಿನಂತೆ ನಡೆಯಲಿವೆ
1.ಬೆಳಿಗ್ಗೆ 10.00ಗಂಟೆಗೆ ಪುಣಚ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಪರಿಯಾಳ್ತಡ್ಕ ಜಂಕ್ಷನ್ ಬಳಿ,
2.ಮಧ್ಯಾಹ್ನ 12.00 ಗಂಟೆಗೆ ಬಲ್ನಾಡು ವಲಯ ಕಾಂಗ್ರೆಸ್ ಆಶ್ರಯದಲ್ಲಿ ಬುಳರಿಕಟ್ಟೆ ಸಾಜ ಕ್ರಾಸ್ ರಿಕ್ಷಾ ನಿಲ್ದಾಣ ಬಳಿ.
3.ಮಧ್ಯಾಹ್ನ 2.00 ಗಂಟೆಗೆ ಕೊಡಿಪ್ಪಾಡಿ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಕೊಡಿಪ್ಪಾಡಿ ಕಾಂಗ್ರೆಸ್ ಕಚೇರಿ ಬಳಿ.
4 ಸಂಜೆ 4.00 ಗಂಟೆಗೆ ಕಬಕ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಕಬಕ ಜಂಕ್ಷನ್ ಬಳಿ.
ಈ ಸಭೆಯಲ್ಲಿ ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್, ಮಾಜಿ ಸಚಿವರಾದ ರಮನಾಥ ರೈ, ಶಾಸಕರಾದ ಐವನ್ ಡಿಸೋಜ,ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಯಾದ ಪದ್ಮರಾಜ್ ಮತ್ತು ರಾಜ್ಯ ವಕ್ತಾರ ಎಂ ಜೆ ಹೆಗ್ಡೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾಧ್ಯಕ್ಷರಾದ ಸುಭಾಷ್ ಶೆಟ್ಟಿ ಕೊಳ್ನಾಡು ಸೇರಿದಂತೆ ಜಿಲ್ಲೆಯ ಹಲವು ಮಂದಿ ನಾಯಕರು ಭಾಗವಹಿಸಲಿದ್ದಾರೆ. ಇದಲ್ಲದೆ ಜಿಲ್ಲೆಯ ಪ್ರಮುಖ ವಾಗ್ಮಿಗಳು ಭಾಗವಹಿಸಿ ಸಾರ್ವಜನಿಕರಿಗೆ ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಬಿಜೆಪಿ ಹರಡುತ್ತಿರುವ ಸುಳ್ಳಿನ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ ಆದ್ದರಿಂದ ಪುಣಚ, ಬಲ್ನಾಡು, ಕೊಡಿಪ್ಪಾ ಡಿ,ಕಬಕ ಗ್ರಾಮದ ಮತದಾರ ಬಂಧುಗಳು, ಕಾಂಗ್ರೆಸ್ ಕಾರ್ಯಕರ್ತರು,ಜನ ನಾಯಕರುಗಳು ಸೇರಿದಂತೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.