ವಿಟ್ಲ;-
*ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸಂಸ್ಥಾಪನ ದಿನ ಆಚರಣೆ* ಪ್ರಯುಕ್ತ *ಎಸ್ಡಿಪಿಐ ವಿಟ್ಲ ಬ್ಲಾಕ್ ಸಮಿತಿ ವತಿಯಿಂದ ಹಸಿವು ಮುಕ್ತ ಸ್ವಾತಂತ್ರ್ಯ , ಭಯ ಮುಕ್ತ ಸ್ವಾತಂತ್ರ್ಯದ ಘೋಷಣೆಯೊಂದಿಗೆ ಮುಂದುವರಿಯುತ್ತಿರುವ ಎಸ್.ಡಿ. ಪಿ.ಐ ಪಕ್ಷದ 17ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಬ್ಲಾಕ್ ಮಟ್ಟದ ಧ್ವಜಾರೋಹಣ ಮತ್ತು ಸಭಾ ಕಾರ್ಯಕ್ರಮವನ್ನು ಕಂಬಳಬೆಟ್ಟು ಜಂಕ್ಷನ್ ನಲ್ಲಿ ಇಂದು (21/06/2025)ಬೆಳಿಗ್ಗೆ 9:30 ಗಂಟೆಗೆ ಸರಿಯಾಗಿ ನೆರವೇರಿಸಲಾಯಿತು.*
*SDPI ವಿಟ್ಲ ಬ್ಲಾಕ್ ಸಮಿತಿ ಅಧ್ಯಕ್ಷರಾದ ಕಮರುದ್ದಿನ್ ಪುಣಚ ಧ್ವಜಾರೋಹಣ ನೆರವೇರಿಸಿದರು*,
*SDPI ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕೀರ್ ಅಳಕೆಮಜಲ್ ಮತ್ತು ಪುತ್ತೂರು ಕ್ಷೇತ್ರ ಸಮಿತಿ ಕೋಸಧಿಕಾರಿ ಮುಸ್ತಫ D. B. ಒಕ್ಕೆತೂರ್ ಸಭೆಯನ್ನು ಉದ್ದೆಶಿಸಿ ಮತಾನಾಡಿ ಕಾರ್ಯಕರ್ತರಿಗೆ, ಹಿತೈಷಿಗಳಿಗೆ ಹಾಗೂ ಎಲ್ಲಾ ಸಹೃದಯಿ ನಾಗರಿಕರಿಗೆ SDPI ಸಂಸ್ಥಾಪನ ದಿನದ ಶುಭಾಶಯವನ್ನು ಹೇಳಿದರು.*
*ಈ ಸಂದರ್ಭದಲ್ಲಿ SDPi ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಾದ ಸಿದ್ದೀಕ್ ಉರಿಮಜಲ್, ಮರಿಯಮ್ಮ ಕಂಬಳಬೆಟ್ಟು, ಸಿದ್ದೀಕ್ ಕಂಬಳಬೆಟ್ಟು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯೆ ಶಾಕೀರ ಅಬ್ದುಲ್ಲಾ ಹಾಗು SPDI ಕಂಬಳಬೆಟ್ಟು ಉಪಾಧ್ಯಕ್ಷರಾದ ಇಸ್ಮಾಯಿಲ್, ಪಟ್ಟಣ ಸಮಿತಿ ಅಧ್ಯಕ್ಷ ರಫೀಕ್ ಪೊನ್ನೋಟು, ಹಮೀದ್ ಕಂಬಳಬೆಟ್ಟು ಮತ್ತುಸ್ಥಳೀಯ SPDI ಕಾರ್ಯರ್ತರು ಮತ್ತು ನಾಯಕರು ಉಪಸ್ಥಿತರಿದ್ದರು.*
*SDPI ವಿಟ್ಲ ಬ್ಲಾಕ್ ಕಾರ್ಯದರ್ಶಿ ಯಾದ ರಹೀಮ್ ಕಂಬಳಬೆಟ್ಟು ಸ್ವಾಗತಿಸಿ, ವಂದಿಸಿದರು* .