ವಿಟ್ಲ:- ಇಸ್ರೇಲ್ ಮತ್ತು ಇರಾನ್ ರಾಷ್ಟ್ರದ ನಡುವೆ ಯುದ್ದ ಕದನ ಆರಂಭವಾಗಿರುವುದರಿಂದ ಇರಾನ್ ರಾಷ್ಟ್ರದಲ್ಲಿರುವ ಅನೇಕ ಭಾರತೀಯ ಉದ್ಯೋಗಸ್ಥರು ತೊಂದರೆ ಆನುಭವಿಸುತ್ತಿದ್ದಾರೆ ಮತ್ತು ಇರಾನ್ ನಲ್ಲಿ ಸಂಪೂರ್ಣವಾಗಿ ನೆಟ್ವರ್ಕ್ ಕನೆಕ್ಟ್ ಕಡಿತ ಆಗಿರುವುದರಿಂದ ಯಾವುದೇ ಸಂಪರ್ಕವನ್ನು ಕೂಡ ಉದ್ಯೋಗಸ್ಥರು ಆಗಲಿ ಉದ್ಯೋಗಸ್ಥರ ಮನೆಯವರಿಗೆ ಸಂಪರ್ಕ ಸಾಧ್ಯ ಆಗ್ತಿಲ್ಲ ಈ ನಿಟ್ಟಿನಲ್ಲಿ ಭಾರತ ಸರ್ಕಾರದ ತಕ್ಷಣ ಇರಾನ್ ರಾಷ್ಟ್ರದಲ್ಲಿರುವ ಭಾರತೀಯ ಉದ್ಯೋಗಸ್ಥರನ್ನು ಭಾರತಕ್ಕೆ ಕರೆತರುವ ಪ್ರಯತ್ನ ಮಾಡಬೇಕಾಗಿದೆ ಎಂದು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ
ಈಗಾಗಲೇ ದ.ಕ.ಜಿಲ್ಲೆಯವರು ಮತ್ತು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ಯುವಕರ ಬಗ್ಗೆ ದ.ಕ.ಜಿಲ್ಲೆಯ ಜಿಲ್ಲಾಧಿಕಾರಿಯವರಿಗೆ ಸಂಪೂರ್ಣ ಮಾಹಿತಿಯನ್ನು ನೀಡುವ ಕೆಲಸ ಕಾರ್ಯವನ್ನು ಮಾಡಿದ್ದೇನೆ ತಕ್ಷಣ ಕೇಂದ್ರ ಸರಕಾರ ಈ ವಿಚಾರದಲ್ಲಿ ವಿಶೇಷ ಗಮನ ಹರಿಸಬೇಕು ಎಂದು ಪತ್ರಿಕಾ ಪ್ರಕಟಣೆ ಮೂಲಕ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ಸರಕಾರವನ್ನು ಆಗ್ರಹಿಸಿದ್ದಾರೆ