ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆ ನಾರ್ಶ ಮೈದಾನದಲ್ಲಿ ಬಹಳಷ್ಟು ವಿಜೃಂಭಣೆಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಶಾಲೆಗೆ ಹೊಸದಾಗಿ ಕೈತೋಟ ರಚನೆ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮವು ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ನಾರ್ಶ ಇವರ ಅಧ್ಯಕ್ಷತೆಯಲ್ಲಿ ನಡೆಯಿತು, ಬಿಳಿಗ್ಗೆ 9:15 ಗಂಟೆಗೆ ಧ್ವಜಾರೋಹಣ ಮತ್ತು ಮಕ್ಕಳಿಗೆ ಶೂಸ್ ವಿತರಣೆ ಕಾರ್ಯಕ್ರಮ ಮತ್ತು ಶಾಲೆಗೆ ಕೈತೋಟ ರಚನೆಯ ಆರಂಭಿಕ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶಂಕರ್ ಮಾಸ್ಟರ್,ಮಾಜಿ ಅಧ್ಯಕ್ಷರಾದ ಹಮೀದ್ ನಾರ್ಶ, ಯಾಕುಬ್ ನಾರ್ಶ, ಹಳೆಯ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಸೆರ್ಕಳ, ಕೆ.ಪಿ ಬೈಲ್ ಮಸೀದಿಯ ಅಧ್ಯಕ್ಷರಾದ ರಫೀಕ್ ಪವಿತ್ರ, ಅಕ್ಷಯ ಚಾರಿಟಿಯ ಕರೀಂ ಕದ್ಕಾರ್, ಶಾಕೀರ್ ಬಡಕಬೈಲ್, ಸಹ ಶಿಕ್ಷಕರು, ಶಾಲಾಭಿವೃದ್ದಿ ಸಮಿತಿ ಸದಸ್ಯರು, ಹಳೆಯ ವಿಧ್ಯಾರ್ಥಿಗಳು, ಮಕ್ಕಳ ಹೆತ್ತವರು, ಊರಿನ ನಾಗರಿಕರು ಭಾಗವಹಿಸಿದರು….
Subscribe to Updates
Get the latest creative news from FooBar about art, design and business.



