ಹತ್ತಾರು ಯುವ ಶ್ರೇಷ್ಠರು ಪುತ್ತೂರಿನ ಚಾರಿತ್ರಿಕ ಪುಟಗಳಲ್ಲಿ ಕಂಗೊಳಿಸಿದ್ದಾರೆ ಆ ಯುವ ಶ್ರೇಷ್ಠರ ಯಾದಿಯಲ್ಲಿ ಉದ್ಯಮಿ ಶ್ರೀ ಶಿವರಾಮ ಆಳ್ವರು ಒಬ್ಬರಾಗಿದ್ದಾರೆ.ಪುತ್ತೂರಿನ ಕುರಿಯ ಬಳ್ಳಮಜಲಿನ ದೇರಣ್ಣ ಆಳ್ವರ ಸುಪುತ್ರರಾದ ಶ್ರೀ ಶಿವರಾಮ ಆಳ್ವರು ಬಿ.ಎ. ಪದವೀಧರರಾಗಿ ವ್ಯವಹಾರಿಕ ರಂಗಕ್ಕೆ ಪಾದಾರ್ಪಣೆ ಮಾಡಿ,ಜನಮನ್ನಣೆ ಗಳಿಸಿದವರು ರಾಜಕೀಯ ನಾಯಕರೊಂದಿಗಿನ ಒಡನಾಡ, ಉನ್ನತ ಪೊಲೀಸ್ ಅಧಿಕಾರಿಗಳ ಬಾಂಧವ್ಯ, ಅಪಾರ ಬಂಧುಮಿತ್ರರ ಸ್ನೇಹ, ಪರೋಪಕಾರದ ಪ್ರತೀಕವಾಗಿರುವ ಶ್ರೀ ಆಳ್ವರು ಒಳ್ಳೆಯ ಸಮಾಜ ಸೇವಕರು ಆಗಿದ್ದಾರೆ.
ವಿದ್ಯಾರ್ಥಿ ಜೀವನದಲ್ಲೇ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ನಾಯಕರಾಗಿ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಶ್ರಮಿಸಿದ ಶ್ರೀ ಶಿವರಾಮ ಆಳ್ವ ರೂ 3 ವರ್ಷಗಳ ಕಾಲ ಎನ್. ಎಸ್. ಯು (ಐ)ನಪುತ್ತೂರು ಘಟಕದ ಅಧ್ಯಕ್ಷರಾಗಿಯೂ, 1ವರ್ಷ ವಿ.ವಿ. ಸೆನೆಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದಾರಲ್ಲದೇ ಇದೀಗ ತನ್ನ ಬಿಡುವಿಲ್ಲದ ವ್ಯವಹಾರಗಳ ನಡುವೆಯೂ ವಿವಿಧ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ದುಡಿಯುತ್ತಾ ಎಲ್ಲರ ಅಚ್ಚುಮೆಚ್ಚಿನ ಕಾಂಗ್ರೆಸ್ ಮುಖಂಡರಾಗಿ ಪ್ರಜ್ವಲಿಸುತ್ತಿದ್ದಾರೆ. ವ್ಯಾವಹಾರಿಕ ರಂಗದಲ್ಲೂ ತನ್ನ ಪ್ರಾಮಾಣಿಕತೆಯನ್ನು ಉಳಿಸಿಕೊಂಡು ಜನರ ವಿಶ್ವಾಸವೆಂಬ ಬಂಡವಾಳದಿಂದ ಜನಪಯೋಗಿ ವ್ಯವಹಾರಗಳಲ್ಲೂ ನಡೆಸುತ್ತಿರುವ ಶ್ರೀ ಶಿವರಾಮ ಆಳ್ವರು ನಾಡಿಗೆ ಮಾದರಿಯಾಗಬೇಕೆಂಬ ಪ್ರೇರಣೆಯನ್ನು ಯುವಕರಿಗೆ ನೀಡುತ್ತಿರುವುದು ಅವರ ವ್ಯಾವಹಾರಿಕ ಮತ್ತು ರಾಷ್ಟ್ರೀಯ ಪ್ರಜ್ಞೆಯ ದ್ಯೋತಕವಾಗಿದೆ .
ಶ್ರೀ ಶಿವರಾಮ ಆಳ್ವರಂತಹ ಉದ್ಯಮಿಗಳು ಎಲ್ಲಾ ರಂಗಗಳಲ್ಲೂ ನೇತೃತ್ವ ವಹಿಸಿಕೊಂಡು ನಾಡಿನ ಶ್ರೇಯೋಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ.
ಶೇಕ್ – ಪುತ್ತೂರು