Subscribe to Updates
Get the latest creative news from FooBar about art, design and business.
Author: PrasakthaNews
ದಿನಾಂಕ 23.06.2025 ರಂದು ಬಿಜೆಪಿಯು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಗ್ರೇಸ್ ಸರಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಜನರಿಗೆ ತಪ್ಪು ಮಾಹಿತ ನೀಡಿರುತ್ತಾರೆ. ಇದರ ಸಲುವಾಗಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ವಿಟ್ಲ ಬ್ಲಾಕ್ ಕಾಂಗ್ರೇಸ್ ಮುಂದಾಳತ್ವದಲ್ಲಿ ಬ್ಲಾಕ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಾಗುತ್ತು ರವರ ನೇತೃತ್ವದಲ್ಲಿ ವಿಟ್ಲ ಬ್ಲಾಕ್ ಕಾಂಗ್ರೇಸ್ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ‘ಬಿಜೆಪಿಯ ಸುಳ್ಳಿಗೆ ಕಾಂಗ್ರೆಸ್ ಉತ್ತರ’ ಜನಜಾಗೃತಿ ಸಭೆಯು ವಿಟ್ಲ ಬ್ಲಾಕ್ ವ್ಯಾಪ್ತಿಯ ಮಾಣಿಲ,ಪೆರುವಾಯಿ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಮಾಣಿಲ ಜಂಕ್ಷನ್ ಮತ್ತು ಪೆರುವಾಯಿ ಜಂಕ್ಷನ್ ನಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮುಹಮ್ಮದ್,ಪುತ್ತೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ದ ಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ,ಪುತ್ತೂರು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ,ವಿಟ್ಲ ಮಸ್ಕಾ ಸಲಹಾ ಸಮಿತಿ ಸದಸ್ಯ ಕರೀಂ…
ವಿಟ್ಲ: ವಿಟ್ಲ ಬ್ಲಾಕ್ ಕಾಂಗ್ರೆಸ್ ಮತ್ತು ಪುಣಚ,ಬಲ್ನಾಡು, ಕೊಡಿಪ್ಪಾಡಿ,ಕಬಕ ವಲಯ ಕಾಂಗ್ರೆಸ್ ನ ಆಶ್ರಯದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ಬೃಹತ್ ಕಾಂಗ್ರೆಸ್ ಜನ ಜಾಗೃತಿ ಸಭೆಯು ಜೂ.29 ಆದಿತ್ಯವಾರದಂದು ಈ ಕೆಳಗಿನಂತೆ ನಡೆಯಲಿವೆ 1.ಬೆಳಿಗ್ಗೆ 10.00ಗಂಟೆಗೆ ಪುಣಚ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಪರಿಯಾಳ್ತಡ್ಕ ಜಂಕ್ಷನ್ ಬಳಿ, 2.ಮಧ್ಯಾಹ್ನ 12.00 ಗಂಟೆಗೆ ಬಲ್ನಾಡು ವಲಯ ಕಾಂಗ್ರೆಸ್ ಆಶ್ರಯದಲ್ಲಿ ಬುಳರಿಕಟ್ಟೆ ಸಾಜ ಕ್ರಾಸ್ ರಿಕ್ಷಾ ನಿಲ್ದಾಣ ಬಳಿ. 3.ಮಧ್ಯಾಹ್ನ 2.00 ಗಂಟೆಗೆ ಕೊಡಿಪ್ಪಾಡಿ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಕೊಡಿಪ್ಪಾಡಿ ಕಾಂಗ್ರೆಸ್ ಕಚೇರಿ ಬಳಿ. 4 ಸಂಜೆ 4.00 ಗಂಟೆಗೆ ಕಬಕ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಕಬಕ ಜಂಕ್ಷನ್ ಬಳಿ. ಈ ಸಭೆಯಲ್ಲಿ ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್, ಮಾಜಿ ಸಚಿವರಾದ ರಮನಾಥ ರೈ, ಶಾಸಕರಾದ ಐವನ್ ಡಿಸೋಜ,ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಯಾದ ಪದ್ಮರಾಜ್ ಮತ್ತು ರಾಜ್ಯ ವಕ್ತಾರ…
ಪುತ್ತೂರು:- ಖುರ್ರತುಸ್ಸಾದಾತ್ ಕೂರತ್ ತಂಙಳ್ ಉರೂಸ್ ಕಾರ್ಯಕ್ರಮದ 3 ನೇ ದಿನವಾದ ಇಂದು ಜೂ.28 ರಂದು ನಡೆಯುವ ಉರೂಸ್ ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ
ಪುತ್ತೂರು:- ಖುರ್ರತುಸ್ಸಾದಾತ್ ಕೂರತ್ ತಂಙಳ್ ಉರೂಸ್ ಕಾರ್ಯಕ್ರಮದ 3 ನೇ ದಿನವಾದ ಇಂದು ಜೂ 28 ಇಂದು ನಡೆಯುವ ಉರೂಸ್ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರಕಾರದ ಮಾಜಿ ಸಚಿವರಾದ ಬಿ.ರಮನಾಥ್ ರೈ ಅವರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ
ಮಂಗಳೂರು :- ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಆಡಳಿತದಿಂದ ಅತಿ ಹೆಚ್ಚು ಲಾಭ ಪಡೆದವರು ದ.ಕ.ಜಿಲ್ಲೆಯವರು ಜಿಲ್ಲೆಯ ಜನರಿಗೆ ಇಂದಿರಾಗಾಂಧಿ ಅವರ ಋಣವಿದೆ ಎಂದು ಮಾಜಿ ಸಚಿವ ಬಿ ರಮನಾಥ್ ರೈ ಹೇಳಿದರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿಯವರು ರಾಜಕೀಯ ಕಾರಣಕ್ಕೆ ತುರ್ತು ಪರಿಸ್ಥಿತಿ ವಿಚಾರವನ್ನು ಮುಂದಿಟ್ಟುಕೊಂಡು ಅವರನ್ನು ಅವಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ ತುರ್ತು ಪರಿಸ್ಥಿತಿಯಿಂದ ಬಿಜೆಪಿಯವರಿಗೆ ಸಮಸ್ಯೆಯಾಗಿರಬಹುದು ಆದರೆ ಸಮಾಜದ ದುರ್ಬಲ ವರ್ಗದವರಿಗೆ ಯಾವುದೇ ಸಮಸ್ಯೆಯಾಗಿಲ್ಲ ಯಾವೊಬ್ಬ ಬಡವನೂ ಜೈಲಿಗೆ ಹೋದ ಉದಾಹರಣೆ ಇಲ್ಲ ಎಂದರು ಇಂದಿರಾ ಗಾಂಧಿಯವರು ಜಾರಿಗೆ ತಂದಿರುವ ಭೂ ಮಸೂದೆ ಕಾನೂನು ಬ್ಯಾಂಕ್ ಗಳ ರಾಷ್ಟೀಕರಣ, ಜೀತ ಪದ್ದತಿ ನಿರ್ಮೂಲನೆ ಋಣಭಾರ ಮುಕ್ತಿ 20 ಅಂಶಗಳ ಕಾರ್ಯಕ್ರಮ ಮೊದಲಾದವುಗಳಿಂದ ಜನರಿಗೆ ಲಾಭವಾಗಿದೆ ವಿವಿಧ ಕಾರ್ಯಕ್ರಮಗಳ ಫಲಾನುಭವಿಗಳಲ್ಲಿ ಹೆಚ್ಚಿನ ಸಂಖ್ಯೆಯವರು ದ.ಕ.ಜಿಲ್ಲೆಯವರು ತುರ್ತು ಪರಿಸ್ಥಿತಿಯನ್ನು ಮಾತನಾಡುವವರಿಗೆ ಇದನ್ನು ನೆನಪಿಸಬೇಕಾಗಿದೆ ಬಿಜೆಪಿಯವರಿಗೆ ಮತೀಯ ಭಾವನೆ ಕೆರಳಿಸುವ ಉದ್ದೇಶವೇ ಹೊರತು ಅಭಿವೃದ್ಧಿ…
ವಿಟ್ಲ: ವಿಟ್ಲ ಬ್ಲಾಕ್ ಕಾಂಗ್ರೆಸ್ ಮತ್ತು ಮಾಣಿಲ,ಪೆರುವಾಯಿ,ಕೇಪು.ಅಳಿಕೆ ವಲಯ ಕಾಂಗ್ರೆಸ್ ನ ಆಶ್ರಯದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ಬೃಹತ್ ಕಾಂಗ್ರೆಸ್ ಜನ ಜಾಗೃತಿ ಸಭೆಯು ಜೂ.28 ರಂದು ಈ ಕೆಳಗಿನಂತೆ ನಡೆಯಲಿವೆ 1.ಬೆಳಿಗ್ಗೆ 10.00ಗಂಟೆಗೆ ಮಾಣಿಲ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಮಾಣಿಲ ರಿಕ್ಷಾ ತಂಗುದಾಣ ಬಳಿ, 2.ಮಧ್ಯಾಹ್ನ 12.00 ಗಂಟೆಗೆ ಪೆರುವಾಯಿ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಪೆರುವಾಯಿ ರಿಕ್ಷಾ ನಿಲ್ದಾಣ ಬಳಿ. 3.ಮಧ್ಯಾಹ್ನ 2.00 ಗಂಟೆಗೆ ಕೇಪು ವಲಯ ಕಾಂಗ್ರೆಸ್ ಆಶ್ರಯದಲ್ಲಿ ಅಡ್ಯನಡ್ಕ ಜಂಕ್ಷನ್ ಬಳಿ. 4 ಸಂಜೆ 4.00 ಗಂಟೆಗೆ ಅಳಿಕೆ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಶಾರದಾ ವಿಹಾರ ಜಂಕ್ಷನ್ನ ಬಳಿ. ಈ ಸಭೆಯಲ್ಲಿ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಸೇರಿದಂತೆ ಜಿಲ್ಲೆಯ ಹಲವು ಮಂದಿ ನಾಯಕರು ಭಾಗವಹಿಸಲಿದ್ದಾರೆ. ಇದಲ್ಲದೆ ಜಿಲ್ಲೆಯ ಪ್ರಮುಖ ವಾಗ್ಮಿಗಳು ಭಾಗವಹಿಸಿ ಸಾರ್ವಜನಿಕರಿಗೆ ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಬಿಜೆಪಿ ಹರಡುತ್ತಿರುವ ಸುಳ್ಳಿನ…
ದಿನಾಂಕ 23.06.2025 ರಂದು ಬಿಜೆಪಿಯು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಗ್ರೇಸ್ ಸರಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಜನರಿಗೆ ತಪ್ಪು ಮಾಹಿತ ನೀಡಿರುತ್ತಾರೆ. ಇದರ ಸಲುವಾಗಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ಮತ್ತು ವಿಟ್ಲ ಬ್ಲಾಕ್ ಕಾಂಗ್ರೇಸ್ ಮುಂದಾಳತ್ವದಲ್ಲಿ ವಿಟ್ಲ ಬ್ಲಾಕ್ ಕಾಂಗ್ರೇಸ್ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ‘ಬಿಜೆಪಿಯ ಸುಳ್ಳಿಗೆ ಉತ್ತರ’ ಜನಜಾಗೃತಿ ಸಭೆ ನಡೆಯಲಿದೆ. ಜನಜಾಗೃತಿ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಹರೀಶ್ ಕುಮಾರ್,.ಮಾಜಿ ಸಚಿವರಾದ ರಮಾನಾಥ ರೈ.ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ ಶಾಸಕರಾದ ಐವನ್ ಡಿ. ಸೋಜ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ.ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್, ಮಿಥುನ್ ರೈ ರಕ್ಷಿತ್ ಶಿವರಾಮ್,ಕೃಷ್ಣಪ್ಪ ಸುಳ್ಯ, ಇನಾಯತ್ ಆಲಿ.ಎಂ ಎಸ್ ಮುಹಮ್ಮದ್ ಮುಂತಾದ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ.
ಪುತ್ತೂರು:- ಪುತ್ತೂರು ಬ್ಲಾಕ್ ಕಾಂಗ್ರೆಸ್ ನೇತ್ರತ್ವದಲ್ಲಿ ಶಾಸಕ ಶ್ರೀ ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನದಲ್ಲಿ ವಲಯ ಕಾಂಗ್ರೆಸ್ ನಾಯಕರ ಸಹಕಾರದೊಂದಿಗೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಎಲ್ಲಾ ಗ್ರಾಮ ಕೇಂದ್ರಗಳಲ್ಲಿ ಜೂ.28 ರಂದು ಶನಿವಾರ ಅಪರಾಹ್ನ 3 ಗಂಟೆಗೆ ಬಸ್ ನಿಲ್ದಾಣದ ಬಳಿಯ ಗಾಂಧೀಕಟ್ಟೆ ಬಳಿ ಜನಜಾಗೃತಿ ಸಭೆಗೆ ಚಾಲನೆ ದೊರೆಯಲಿದೆ. ತದಬಳಿಕ ಸಂಜೆ 3 ಗಂಟೆಗೆ ಕುಂಬ್ರದಲ್ಲಿ ಸಭೆಯು ನಡೆಯಲಿದೆ ಜೂ.29 ಭಾನುವಾರ ದಿವಸ ಬೆಳಿಗ್ಗೆ 10 ಗಂಟೆಯಿಂದ ಪುರುಷರಕಟ್ಟೆ ಮಧ್ಯಾಹ್ನ 12 ಗಂಟೆಗೆ ಮುಂಡೂರು ಸಿಎ ಬ್ಯಾಂಕ್ ಮುಂಭಾಗ ಅಪರಾಹ್ನ 3 ಗಂಟೆಗೆ ತಿಂಗಳಾಡಿ ಜಂಕ್ಷನ್ ಸಂಜೆ 5 ಗಂಟೆಗೆ ಕೆಯ್ಯೂರು ದ್ವಾರದ ಬಳಿ ಸಭೆಯು ನಡೆಯಲಿದೆ ಜೂ.30 ರಂದು ಸೋಮವಾರ ದಿವಸ ಬೆಳಿಗ್ಗೆ 10 ಗಂಟೆಗೆ ಪರ್ಲಂಪಾಡಿ ಜಂಕ್ಷನ್ ಮಧ್ಯಾಹ್ನ 12 ಗಂಟೆಗೆ ಕೌಡಿಚ್ಚಾರ್, ಅಪರಾಹ್ನ 3 ಗಂಟೆಗೆ ಈಶ್ವರಮಂಗಳ, ಸಂಜೆ 5 ಗಂಟೆಗೆ ಸುಳ್ಯಪದವು ಜಂಕ್ಷನ್ ನಲ್ಲಿ ಸಭೆಯು ನಡೆಯಲಿದೆ. ತಾ- 1-07-2025 ಮಂಗಳವಾರ…
*ಮಂಗಳೂರು.* ಕರ್ನಾಟಕ ಭಾವೈಕ್ಯ ಪರಿಷತ್ ವತಿಯಿಂದ ಆನ್ಲೈನ್ ಕವಿಗೋಷ್ಠಿ ಹಾಗೂ ಭಾವೈಕ್ಯ ವಿಚಾರ ಗೋಷ್ಠಿ ದಿನಾಂಕ: 29-6-2025 ಆದಿತ್ಯವಾರ ಬೆಳಿಗ್ಗೆ 10:00 ಗಂಟೆಯಿಂದ ರಾತ್ರಿ 10:00 ಗಂಟೆ ತನಕ ನಡೆಯಲಿದ್ದು ಹವ್ಯಾಸಿ ಪತ್ರಕರ್ತ,ಕರ್ನಾಟಕ ಭಾವೈಕ್ಯ ಪರಿಷತ್ ಸ್ಥಾಪಕಾಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಪುಣಚ ಸ್ವಾಗತ ಭಾಷಣ ಮಾಡಲಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಎ.ಅಬೂಬಕರ್ ಅನಿಲಕಟ್ಟೆ ವಿಟ್ಲ ಪ್ರಾಸ್ತಾವಿಕ ಭಾಷಣ ಮಾಡಲಿದ್ದು ಕರ್ನಾಟಕ ಭಾವೈಕ್ಯ ಪರಿಷತ್ ಅಧ್ಯಕ್ಷ ಬ ಕೆ.ಎಂ.ಇಖ್ಬಾಲ್ ಬಾಳಿಲ ಸಮಾರಂಭವನ್ನು ಉದ್ಘಾಟಿಸುವರು. ಕರ್ನಾಟಕ ಭಾವೈಕ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ,ಸಾಹಿತಿ ಹೆಚ್.ಭೀಮರಾವ್ ವಾಷ್ಠರ್ ಸುಳ್ಯ ಕವಿಗೋಷ್ಠಿ ಮತ್ತು ಭಾವೈಕ್ಯ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಲಿಮ್ರಾ ಗ್ರೂಪ್ ಆಫ್ ಕರ್ನಾಟಕ ಅಧ್ಯಕ್ಷ ಶೈಖ್ ಮುಹಮ್ಮದ್ ಇರ್ಫಾನಿ ಆಶಯ ಭಾಷಣ ಮಾಡುವರು. ಇಖ್ಬಾಲ್ ಕೋಲ್ಪೆ,ಡಿ.ಐ.ಅಬೂಬಕರ್ ಕೈರಂಗಳ,ಎ.ಬಿ.ಮೊಹಿದೀನ್ ಕಳಂಜ, ಎಂ.ಎ.ಅಬ್ದುರ್ರಹ್ಮಾನ್ ಝುಹ್ರಿ ಮಗಿರೆ,ವಿಜಯದಾಸ ನವಲಿ ರಾಯಚೂರು,ಇಬ್ರಾಹಿಂ ಬಾತಿಷ ಝುಹ್ರಿ ಕುಂಬ್ರ, ಹನೀಫ್ ನಿಝಾಮಿ,ಅಸೈಗೋಳಿ ಮುಖ್ಯ ಅತಿಥಿಗಳಾಗಿ ಬಾಗವಹಿಸುವರು. ಎಸ್.ಬಿ.ಮುಹಮ್ಮದ್ ದಾರಿಮಿ ಉಪ್ಪಿನಂಗಡಿ,ನಾರಾಯಣ ರೈ…
ಮಂಗಳೂರು:- ದ.ಕ.ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಹಲವರು ಹೆಸರು ಕೇಳಿ ಬರುತ್ತಿರುವ ನಡುವೆ ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನು ಎರಡು ವಿಭಾಗ ಅಂದರೆ ಅರ್ಬನ್ ಮತ್ತು ಮಂಗಳೂರು ರೂರಲ್ ಎರಡು ವಿಭಾಗವನ್ನು ಮಾಡುವ ಬಗ್ಗೆ ರಾಜ್ಯ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆ ಚಿಂತನೆ ನಡೆದಿದೆ ಈ ವಿಚಾರವನ್ನು ಸ್ವತಃ ಕಾಂಗ್ರೆಸ್ ಪಕ್ಷದ ಮುಖಂಡರಾಗಿರುವ ವಿ.ಆರ್ ಸುದರ್ಶನ್ ಅವರು ಬಹಿರಂಗಪಡಿಸಿದ್ದಾರೆ ಕಾಂಗ್ರೆಸ್ ಪಕ್ಷದ ಪ್ರಕಾರ ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನು ಈ ರೀತಿಯ ಎರಡು ವಿಭಾಗ ಮಾಡಿದರೇ ಪಕ್ಷಕ್ಕೆ ಹೆಚ್ಚು ಅನುಕೂಲ ಮತ್ತು ಕಾರ್ಯಕರ್ತರಿಗೆ ಕೂಡ ಅನುಕೂಲ ಆಗ್ತದೆ ಎಂಬ ಭಾವನೆ ಇದೆ ಈಗಾಗಿ ಮುಂದಿನ ದಿನಗಳಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷ ಎರಡು ವಿಭಾಗಗಳಾಗಿ ಎರಡು ಅಧ್ಯಕ್ಷ ಆಯ್ಕೆ ನೇಮಕ ಆಗುವುದು ಬಹುತೇಕ ಖಚಿತವಾಗಿದೆ! ಇದರಿಂದಾಗಿ ಮಂಗಳೂರು ರೂರಲ್ ಡಿಸಿಸಿ ಭಾಗದವರಿಗೆ ಮಂಗಳೂರು ವ್ಯಾಫ್ತಿ ಮತ್ತು ಅರ್ಬನ್ ಡಿಸಿಸಿಗೆ ಬಂಟ್ವಾಳ ಅಥವಾ ಪುತ್ತೂರು ವ್ಯಾಪ್ತಿ ಮಾಡುವ ಬಗ್ಗೆ ಚಿಂತನೆ ನಡೆದಿದೆ ದ.ಕ.ಜಿಲ್ಲೆಯಲ್ಲಿ…


